Price Drop ಸಾರ್ವಜನಿಕರಿಗೆ ಗುಡ್ ನ್ಯೂಸ್ ಅಗತ್ಯ ವಸ್ತುಗಳ ಬೆಲೆ ಇಳಿಕೆ.!

 

Price Drop: ಮಧ್ಯಮ ವರ್ಗದ ಜನರಿಗೆ ಸಿಹಿ ಸುದ್ದಿ, ಅಗತ್ಯ ವಸ್ತುಗಳ ಬೆಲೆ ಇಳಿಕೆ ನಿರೀಕ್ಷೆ.!

ಮಧ್ಯಮ ವರ್ಗದ ಜನತೆ ಹಾಗೂ ಬಡವರು ಬಳಕೆ ಮಾಡುವ ದೈನಂದಿನ ಅಗತ್ಯ ವಸ್ತುಗಳ ಮೇಲೆ ಕೇಂದ್ರ ಸರ್ಕಾರ ಬಂಪರ್ ಉಡುಗೊರೆಯೊಂದನ್ನು ಘೋಷಿಸುವ ಸಾಧ್ಯತೆ ಹೆಚ್ಚಾಗಿದೆ. ಜನತೆಯ ಜೇಬು ಹಗುರವಾಗಲಿ ಎಂಬ ಉದ್ದೇಶದಿಂದ ಸರಕು ಮತ್ತು ಸೇವೆಗಳ ಮೇಲಿನ ತೆರಿಗೆಯು (GST) ಕಡಿತಗೊಳ್ಳುವ ಸಾಧ್ಯತೆ ಇದೆ ಎಂಬ ಸುದ್ದಿ ಈಗ ವೈರಲ್ ಆಗುತ್ತಿದೆ.

ಯಾವ ವಸ್ತುಗಳ ಬೆಲೆ ಇಳಿಯಲಿದೆ.?

ಕೇಂದ್ರ ಸರ್ಕಾರ ಈಗ ಜಿಎಸ್‌ಟಿ ಶ್ಲ್ಯಾಬ್‌ನಲ್ಲಿ ಮಹತ್ವದ ಬದಲಾವಣೆ ಮಾಡಬಹುದಾಗಿದೆ. ಈ ಬದಲಾವಣೆಯ ಪ್ರಕಾರ, ಶೇ. 12 ರ ಜಿಎಸ್‌ಟಿ ಶ್ಲ್ಯಾಬ್ ಅನ್ನು ಸಂಪೂರ್ಣವಾಗಿ ತೆಗೆದುಹಾಕಲಾಗುತ್ತದೆ. ಇದರಿಂದಾಗಿ ಈ ಶ್ಲ್ಯಾಬ್‌ನಲ್ಲಿರುವ ವಸ್ತುಗಳು ಶೇ. 5 ರ ಶ್ಲ್ಯಾಬ್‌ಗೆ ಬಿದ್ದು, ದರ ಕಡಿಮೆಯಾಗಲಿದೆ.

ಇದರಿಂದ ನೇರವಾಗಿ ಲಾಭಪಡುವ ವಸ್ತುಗಳು ಇವು:

  • ಟೂತ್ ಪೇಸ್ಟ್ ಹಾಗೂ ಹಲ್ಲಿನ ಪುಡಿ
  • ಛತ್ರಿಗಳು
  • ಹೊಲಿಗೆ ಯಂತ್ರಗಳು
  • ಪ್ರೆಶರ್ ಕುಕ್ಕರ್, ಅಡುಗೆ ಪಾತ್ರೆಗಳು
  • ಎಲೆಕ್ಟ್ರಿಕ್ ಐರನ್ ಬಾಕ್ಸ್, ಗೀಸರ್
  • ಸಣ್ಣ ತೊಳೆಯುವ ಯಂತ್ರಗಳು
  • ಬೈಸಿಕಲ್‌ಗಳು
  • ₹1000 ಕ್ಕಿಂತ ಮೇಲ್ಪಟ್ಟ ರೆಡಿಮೇಡ್ ಬಟ್ಟೆ
  • ₹500–₹1000 ಬೆಲೆಯ ಪಾದರಕ್ಷೆಗಳು
  • ಸ್ಟೇಷನರಿ ವಸ್ತುಗಳು (ಕಾಗದ, ಪೆನ್ ಇತ್ಯಾದಿ)
  • ಲಸಿಕೆಗಳು
  • ಸೆರಾಮಿಕ್ ಟೈಲ್ಸ್
  • ಕೃಷಿ ಉಪಕರಣಗಳು

ದರ ಇಳಿಕೆ ಆದಿಂದ ಏನು ಲಾಭ.?

ಈ ಬದಲಾವಣೆಯಿಂದ ಮಧ್ಯಮ ವರ್ಗದ ಜನರಿಗೆ ದೈನಂದಿನ ಖರ್ಚುಗಳಲ್ಲಿ ರಿಯಾಯಿತಿ ದೊರೆಯಲಿದೆ. ಶೇ. 12 ಜಿಎಸ್‌ಟಿ ಶ್ಲ್ಯಾಬ್ ತೆಗೆದುಹಾಕಿದರೆ, ಈ ವಸ್ತುಗಳ ಮೌಲ್ಯಗಳಲ್ಲಿ ಸುಮಾರು 7% ರಷ್ಟು ಕಡಿತ ಸಾಧ್ಯವಾಗುತ್ತದೆ. ಇದರಿಂದ ದೇಶದಾದ್ಯಂತ ಗ್ರಾಹಕರಿಗೆ ನೇರ ಲಾಭ ಆಗಲಿದೆ.

ಸರ್ಕಾರದ ಮೇಲೆ ಪರಿಣಾಮ ಎಷ್ಟು.?

ಜಿಎಸ್‌ಟಿ ಶ್ಲ್ಯಾಬ್ ಕಡಿತದ ಈ ಯೋಜನೆಯಿಂದ ಕೇಂದ್ರ ಸರ್ಕಾರಕ್ಕೆ ವಾರ್ಷಿಕ ಸುಮಾರು ₹40,000 ಕೋಟಿ ರಿಂದ ₹50,000 ಕೋಟಿ ಆದಾಯ ನಷ್ಟವಾಗಬಹುದು ಎಂದು ಅಂದಾಜಿಸಲಾಗಿದೆ.

ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಇತ್ತೀಚಿನ ಸಂದರ್ಶನಗಳಲ್ಲಿ ಈ ಬಗ್ಗೆ ಸುಳಿವನ್ನು ನೀಡಿದ್ದಾರೆ.

ಅಂತಿಮ ತೀರ್ಮಾನ ಯಾರು ತೆಗೆದುಕೊಳ್ಳುತ್ತಾರೆ.?

ಈ ಯೋಜನೆ ಜಾರಿಗೆ ಬರಬೇಕಾದರೆ ಜಿಎಸ್‌ಟಿ ಕೌನ್ಸಿಲ್ ಅನುಮೋದನೆ ಅಗತ್ಯವಿದೆ. ಈ ಕೌನ್ಸಿಲ್‌ನಲ್ಲಿ ಎಲ್ಲಾ ರಾಜ್ಯಗಳ ಪ್ರತಿನಿಧಿಗಳು ಭಾಗವಹಿಸುತ್ತಾರೆ.

ಇದಕ್ಕೆ ಕೆಲವು ರಾಜ್ಯಗಳು ಈಗಾಗಲೇ ವಿರೋಧ ವ್ಯಕ್ತಪಡಿಸಿವೆ:

  • ಪಂಜಾಬ್
  • ಕೇರಳ
  • ಮಧ್ಯಪ್ರದೇಶ
  • ಪಶ್ಚಿಮ ಬಂಗಾಳ

ಈ ರಾಜ್ಯಗಳು ಜಿಎಸ್‌ಟಿ ಶ್ಲ್ಯಾಬ್ ಕಡಿತಕ್ಕೆ ತಮ್ಮ ಅಸಹಮತಿ ಸೂಚಿಸಿವೆ. ಆದರೂ, ಜುಲೈ ತಿಂಗಳ ಕೊನೆಯಲ್ಲಿ ನಡೆಯಲಿರುವ 56ನೇ ಜಿಎಸ್‌ಟಿ ಕೌನ್ಸಿಲ್ ಸಭೆಯಲ್ಲಿ ಈ ವಿಷಯ ಪ್ರಸ್ತಾಪವಾಗುವ ನಿರೀಕ್ಷೆ ಇದೆ.

 ಜನರಿಗಾಗಿ ಹೊಸ ಆಶಾಕಿರಣ.!

ಈ ಜಿಎಸ್‌ಟಿ ಶ್ಲ್ಯಾಬ್ ಬದಲಾವಣೆ ಜಾರಿಗೆ ಬಂದರೆ, ಮಧ್ಯಮ ವರ್ಗದ ಜನತೆ, ಬಡವರು ಹಾಗೂ ಸಾಮಾನ್ಯ ಗ್ರಾಹಕರಿಗೆ ಒಂದು ರೀತಿಯ ಆರ್ಥಿಕ ನಿಟ್ಟುಸಿರು ಸಿಗಲಿದೆ. ಹೀಗಾಗಿ, ಮುಂದಿನ ಜಿಎಸ್‌ಟಿ ಕೌನ್ಸಿಲ್ ಸಭೆಯ ನಿರ್ಧಾರವನ್ನು ಈಗ ದೇಶವಾಸಿಗಳು ಆತುರದಿಂದ ನಿರೀಕ್ಷಿಸುತ್ತಿದ್ದಾರೆ.

 

 

WhatsApp Group Join Now
Telegram Group Join Now

Leave a Comment